Monday, November 3

ಶ್ರೀ ಎಸ್.ಎಲ್.ಭೈರಪ್ಪ ನಮ್ಮ ಪುತ್ತೂರಿನಲ್ಲಿ !!!

ನಮ್ಮ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನ ಉಂಟಲ್ಲ, ನಿನ್ನೆ ಅಲ್ಲಿ ಭಾರತೀಯ ವಿಕಾಸ ಪರಿಷತ್ತು, ಕನ್ನಡ ಸಂಘ , ವಿವೇಕಾನಂದ ಕಾಲೇಜು ಕನ್ನಡ ಸಂಘ ಮತ್ತು ಚುಟುಕ ಸಾಹಿತ್ಯ ಪರಿಷತ್ತು ಇವ್ರೆಲ್ಲ ಸೇರಿ ಅಗ್ರಗಣ್ಯ ಕಾದಂಬರಿಕಾರ ಶ್ರೀ ಎಸ್ ಎಲ್ ಭೈರಪ್ಪ ಅವ್ರ ಸಾಹಿತ್ಯಗಳ ವಿಚಾರ ವಿಮರ್ಶೆ, ಸಂವಾದ ಮತ್ತೆ ಸನ್ಮಾನ ಕಾರ್ಯಕ್ರಮ ಮಾಡಿದ್ರು!
ಭಯಂಕರ ಗೌಜಿಯಲ್ಲಿ ಆಯ್ತು ಗೊತ್ತುಂಟ!!!

ಎಲ್ಲಿಯೂ ಸನ್ಮಾನಕ್ಕೆ ತಲೆ ಕೊಡದ ಈ ಭೈರಪ್ಪ ನಮ್ಮ ಪುತ್ತೂರಿನವ್ರ ಕೈಗೆ ಹೇಗೆ ಸಿಕ್ಕಿದ್ದ್ರೂ ಅಂತ ನನಿಗೆ ಬಯಂಕರ ಆಶ್ಚರ್ಯ ! ಬೆಳಿಗ್ಗೆ ಅವ್ರ ಪರ್ವ, ದಾಟು ಮತ್ತು ವಂಶವೃಕ್ಷಗಳ ಮೇಲೆ ನಮ್ಮ ಲಕ್ಷ್ಮೀಶ ತೋಳ್ಪಾಡಿ, ರಾಮಚಂದ್ರ ದೇವ ಮಾತಾಡಿದ್ರು.
ಮತ್ತೆ ಮಧ್ಯಾಹ್ನ ಒಂದು ಗಟ್ಟಿ ಊಟ ಆಯ್ತು , ಮದ್ಯಾನ್ನ ಮೇಲೆ ಬಂದವರ ನೇರ ಸಂವಾದ ಕಾರ್ಯಕ್ರಮ - ಭೈರಪ್ಪರೊಟ್ಟಿಗೆ ಅಂತ ಮಾಡಿದ್ರು. ಭೈರಪ್ಪನವರಿಗೆ ಯಾರುಬೇಕಾದ್ರೂ ಪ್ರಶ್ನೆ ಕೇಳ್ಬೌದು, ಸಮದಾನದಲ್ಲಿ ಉತ್ತರ ಕೊಡ್ತಾರೆ! ಪ್ರಶ್ನೆ ಕೇಳುವವರು ಅವ್ರ ಹೆಸ್ರು ಮತ್ತೆ ವೃತ್ತಿ ಮೊದ್ಲು ಹೇಳ್ಬೇಕು ಅಂತ ಎನೌನ್ಸ್ ಮಾಡಿದ್ರು ಅಲ್ಲಿ.

ವಿಷಯ ಎಂತ ಗೊತ್ತುಂಟ? ಪ್ರಶ್ನೆ ತುಂಬ ಜೆನ ಕೇಳಿದ್ರು, ಮ್, ಅದ್ರಲ್ಲಿ ಒಬ್ಬೊಬ್ಬ್ರು ಒಂದೊಂದು ಕೆಲ್ಸ ಮಾಡುವವರು: ವಕೀಲ, ಗೃಹಿಣಿ, ಬಿಸ್ನೆಸ್ , ಲೆಕ್ಚರು , ಮಾಷ್ಟ್ರು , ಟೀಚರು, ಸಾಹಿತಿ, ಸಾಫ್ಟ್ವೇರ್ ಇಂಜಿನಿಯರು ;-) - ಹೀಗೆ ನಮುನೆ ನಮುನೆ ಜೆನ ಎಲ್ಲ ಪ್ರಶ್ನೆ ಕೇಳಿದ್ರು. ಅದೇ ನೋಡಿ ನಮ್ಮ ಭೈರಪ್ಪನವರ ಪವರು!
ಬರೇ ಹೋತ ಗಡ್ಡ ಬಿಟ್ಟ ಒಂದು ೩೦-೩೫ ವರ್ಷದ ಬುದ್ಧಿಜೀವಿಗಳು ಮಾತ್ರ ಪ್ರಶ್ನೆ ಕೇಳಿದ್ರೆ ಅದು ಒಂದು ಟೈಪು - ಹೀಗೆ ಎಲ್ಲಾ ನಮುನೆಯ ಜೆನ ಕೇಳಿದ್ರೆ ಅದೇ ಒಂದು ಟೈಪು; ಅಲ್ವಾ? ಎಂತ ಹೇಳ್ತೀರಿ?

ನಂಗೆ ಕುಶೀ ಆಯಿತು ಅದನ್ನು ನೋಡಿ. ಹತ್ರ ಕೂತ ನಮ್ಮವ್ರು "ನೋಡು ಮಾರಾಯ! ಆರೆಲ್ಲ ಬೈಂದವು ಹೇಳಿ" - ಹೇಳಿ ಹೇಳಿದ್ರು, ಬದೀಯಲ್ಲಿ ಶಾಲು ಹಾಕಿ ಕೂತ ನಮ್ಮ ಮಾಲಿಂಗೆಶ್ವರ ದೇವಸ್ಥಾನದ ಪೂಜೆಬಟ್ರನ್ನು ತೋರಿಸಿಕೊಂಡು !
ಹೌದು ಕೂಡ. ಉದ್ದ ಲಂಗ ಹಾಕಿದ ಕೂಸುಗಳಿಂದ ಹಿಡಿದು ಪೂರ್ತಿ ಗಡ್ಡ ಬಿಟ್ಟ ಸಾತ್ವಿಕರ ವರೆಗೆ ಸಾಮಾನ್ಯ ಎಲ್ಲೊರೂ ಬಂದಿದ್ದಾರೆ. ಆ ಸಭಾಂಗಣ ಪುಲ್ ಆಗಿತ್ತು ಮಾರಾಯ್ರೇ ! ಕೆಲವು ಜೆನ ನಮ್ಮ ಊರಿಂದ ಎಲ್ಲ ಬೆಳಿಗ್ಗೆ ಸಿಟಿ ಬಸ್ಸಿಗೇ ಬಂದು ಕೂತಿದ್ದ್ರು :-) .

ವಿವೇಕಾನಂದ ಕೊಲೇಜು ಉಂಟಲ್ಲ, ಅಲ್ಲಿಯ ಕನ್ನಡ ಸಂಘ ದ ಮುಖ್ಯ ಪಾತ್ರ ಅಂತೆ ಇದ್ರಲ್ಲಿ. ಕೊಲೇಜಿನ ಲೆಕ್ಚರು , ಪ್ರಿನ್ಸಿಪಾಲರು , ಮಕ್ಳು, ಕ್ಲಾರ್ಕು - ಎಲ್ಲ ಇದ್ರು ಅಲ್ಲಿ :-)
ಸನ್ಮಾನ ಕಾರ್ಯಕ್ರಮ ಅಂತ ಇತ್ತು ಅಕೇರಿಗೆ - ಅದ್ರಲ್ಲಿ ಯಾರು ಬೇಕಾದ್ರೂ ಮಾಲೆ ಹಾಕ್ಬೌದು ಅಂತ ಹೇಳಿದ್ರು. ಆದ್ರೆ ಎಂತ ಮಾಡುದು, ನನಿಗೆ ಬೆಂಗ್ಳೂರು ಬಸ್ಸಿಗೇ ಲೇಟಾಗ್ತದೆ ಅಂತ ಬೇಗ ಹೊರಟದ್ದು ನಾನು.
ಪುತ್ತೂರಿನ ಘಟಾನುಘಟಿಗಳಾದ ಉರಿಮಜಲು ರಾಮಜ್ಜ, ಜಿ ಯಲ್ ಆಚಾರ್ಯ, ವಿ ಬಿ ಅರ್ತಿಕಜೆ, ಅವ್ರು, ಇವ್ರು ಎಲ್ಲ ಬಂದು ಸೇರಿದ್ರು. ಕಾರ್ಯಕ್ರಮ ತುಂಬ ಚೆಂದ ಇತ್ತು.

ಕಾರ್ಯಕ್ರಮ ದ ಅರ್ಧದಲ್ಲಿ ಹೊರಡುವಾಗ ನಾನು ಹತ್ತಿರ ಕೂತವ್ರ ಹತ್ರೆ ಕೇಳಿದೆ:
ಇಲ್ಲಿಗೆ ಬಂದವರಲ್ಲಿ ಎಲ್ಲೊರು ಒಂದು ಲೆಕ್ಕದಲ್ಲಿ ಬುದ್ಧಿ ಜೀವಿಗಳೇ ಅಲ್ವ? ಮತ್ತೆ ಎಂತಕೆ ಅವ್ರು ಹಾಗೆ ಹೇಳಿಕೊಳ್ಳುದಿಲ್ಲ! - ಅಂತ !!! ತಲೆ ಅಡ್ಡಡ್ಡ ಆಡಿಸಿ ನೆಗಾಡಿದ್ರು, ಕಾರಣ ಗೊತ್ತಿಲ್ಲ ಅಂತ :-)
ಕಾರಣ ನಿಮಿಗೆ ಗೊತ್ತುಂಟ ಮಾರಾಯ್ರೇ ?

1 comment:

hareesh said...

commi nisteyava ra kanninalli komuvadigalu