Monday, December 10

ಅಂಬುರುಹದಳ. . .

ಅಂತೂ ಇಂತೂ ಬರೀಲಿಕ್ಕೆ  ಸುರು ಮಾಡಿದೆ  ನಾನು.
ತುಂಬ  ಸಮಯ ಆಯ್ತು ಈ  ಬ್ಲೋಗು ರಚನೆ  ಮಾಡಿ, ಒಂದು  ಲೇಖನ ಸಾ ಹಾಕ್ಲಿಕ್ಕೆ  ಪುರುಸೊತ್ತೇ  ಸಿಕ್ಕಿಕೊಂಡು  ಇರ್ಲಿಲ್ಲ.
ಈಗ  ಸ್ವಲ್ಪ ಪುರ್ಸೊತ್ತು  ಸಿಕ್ಕಿತು, ಅರ್ಜ್ಜಂಟಿನಲ್ಲಿ  ಎರಡು ಪೋಷ್ಟು  ಮಾಡ್ತೇನೆ ಅಂತ  ಗ್ರೇಶಿದ್ದು.
ಎಲ್ಲಿಂದ ಸುರು  ಮಾಡ್ಬೇಕು?

ಹಾಂ..  
ನೋಡಿ,ಇದನ್ನು ಬರೀಲಿಕ್ಕೆ ಒಂದು ಕಾರಣ ಉಂಟಲ್ಲ, ಅದನ್ನು ಹೇಳ್ತೇನೆ ಸುರೂವಿಗೆ.
ಭಾರತದಲ್ಲಿ ಹಲವು ನಮೂನೆಯ ಕನ್ನಡಗಳುಂಟು,ಬೇರೆ ಬೇರೆ ಪ್ರದೇಶದವರು ಬೇರೆ ಬೇರೆ ತರ ಮಾತಾಡ್ತಾರೆ. ಆ ಮಾತಿನ ಶೈಲಿ,  ಧಾಟಿಗಳು ಆಯಾ ಪ್ರದೇಶದ ಜೀವನ ಪದ್ಧತಿಗೆ ಮತ್ತೆ ಲೈಫ್-ಸ್ಟೈಲ್‘ಗೆ ಹಾಸುಹೊಕ್ಕಾಗಿ ಇರ್ತದೆ.
ಗುಲ್ಬರ್ಗ,ಮೈಸೂರು,ಬೆಂಗ್ಳೂರಿನಂತಹ ಪಟ್ಟಣಗಳಲ್ಲಿ ಒಂದು ಥರ,ಮಂಡ್ಯ, ಹಾಸನದಂತಹ ಪ್ರದೇಶಗಳಲ್ಲಿ ಒಂದು ಥರ,ಮಂಗ್ಳೂರಿನಲ್ಲಿ  ಒಂದು ಥರ,ಕುಂದಾಪುರದಲ್ಲಿ ಒಂದು ಥರ..ಇತ್ಯಾದಿ...

ಮಂಗ್ಳೂರಿನಲ್ಲಿ  ಮಾತಾಡುವ ಕನ್ನಡಕ್ಕೆ ಸ್ವಲ್ಪ ವಿಶೇಶ ಉಂಟು. ಮಂಗ್ಳೂರು ಕನ್ನಡ ಅಂತ ಹೇಳಿದ್ರೆ- ಅಂದಾಜಿ ಉಡುಪಿಯಿಂದ ಕಾಸರಗೋಡಿನ ವರೆಗೆ,  ಶಿರಾಡಿಯಿಂದ ಕುಕ್ಕೆ ಸುಬ್ರಮಣ್ಯದವರೆಗೆ ಶಾಲೆಗಳಲ್ಲಿ  ಮಾತಾಡುವ ಕನ್ನಡ  ಅಂತ ಹೇಳ್ಭೌದು. ಹೆಚ್ಚಾಗಿ ಎಲ್ಲರು  ಸ ಮನೆಯಲ್ಲಿ  ಬೇರೆ ಭಾಶೆಯನ್ನೇ  ಮಾತಾಡೂದ್ರಿಂದ  ಅಲ್ಲಿ ಮನೆಭಾಶೆಯಾಗಿ  ಕನ್ನಡ ಮಾತಾಡೂದು  ತುಂಬ ಕಡಿಮೆ  ಜನ. ಕನ್ನಡವನ್ನು  ತುಂಬ Official ಭಾಶೆಯ ಹಾಗೆ ಬಳಸೂದ್ರಿಂದ- ಹೇಳಿದ್ರೆ, ಭಾಷಣ  ಮಾಡ್ಲಿಕ್ಕೆ, ಸರಕಾರೀ ಕಛೇರಿಗಳಲ್ಲಿ, ಶಾಲೆಯಲ್ಲಿ ಮಾಷ್ಟ್ರುಗಳ ಹತ್ತಿರ - ಅಂತ  ಕೆಲವೇ ಕಡೆಗಳಲ್ಲಿ ಮಾತ್ರಾ ಕನ್ನಡ  ಮಾತಾಡೂದು, ಮತ್ತೆಲ್ಲ  ಕಡೆ ತುಳುವೋ, ಮಲೆಯಾಳವೋ, ಕನ್ನಡಕ್ಕೆ  ಹತ್ತಿರವಾದ ಹವ್ಯಕವೋ, ಗೌಡರ ಅರೆ-ಭಾಷೆಯೋ,  ಹಿಂದಿಗೆ ಹತ್ತಿರದ ಕೊಂಕಣಿ, ಕರಾಡ,  ಮರಾಟಿ ಭಾಷೆಯೋ ಎನಾದ್ರು ಮಾತಾಡುದ್ರಿಂದ  ಕನ್ನಡ ಇನ್ನೂಸ ಗ್ರಂಥರೂಪದಿಂದ  ಬಹಳ ವೆತ್ಯಾಸ ಆಗ್ಲಿಲ್ಲ ಅಂತ ಕಾಣುವ ಹಾಗೆ  ಉಂಟು!

ಹಾಗೆ ಇದ್ರೆಸ ಮಂಗ್ಳೂರಿನ  ಪರಿಸರದಿಂದ ಕರ್ನಾಟಕದ ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಕೊಡುಗೆಗಳು ಬಂದದೆ.
ಕೋಟ ಶಿವರಾಮ ಕಾರಂತರು, ಪಂಜೆ ಮಂಗೇಶ ರಾಯರು, ಮಂಜೇಶ್ವರ ಗೋವಿಂದ ಪೈಗಳು, ಕೈಯಾರ ಕಿಂಞಣ್ಣ ರೈಗಳು ಇವರೆಲ್ಲರು ಸಾ ಮಂಗ್ಳೂರು ಕನ್ನಡಮ್ಮನ ಮಕ್ಕಳು.
ಅದಿರ್ಲಿ.. ಇವತ್ತು ಎಂತ ಆಗಿದೆ ಗೊತ್ತುಂಟಾ, ಸಿನೆಮದಲ್ಲಿ ಎಲ್ಲ  ಒಂದು ಮಂಗ್ಳೂರು/  ಉಡುಪಿಯ ಕ್ಯಾರೆಕ್ಟರ್  ಬೇಕಾದ್ರೆ, ಒಬ್ಬ ಗಟ್ಟದ ಮೇಲಿನವನ ಹತ್ತಿರ ನಾಲ್ಕು ಸರ್ತಿ ಮಾರಾಯ್ರೆ,  ಮಾರಾಯ್ರೆ... ಅಂತ ಹೇಳಿಸಿ  ಬಿಡ್ತಾರೆ. ನಿಜವಾದ ಮಂಗ್ಳೂರು  ಕನ್ನಡ ಅವರಿಗೆ ಮಾತಾಡ್ಲಿಕ್ಕೇ ಬರೂದಿಲ್ಲ - ಕೇಳಿಸ ಗೊತ್ತಿರೂದಿಲ್ಲ.

ನಾನು ಹುಟ್ಟಿ, ಬೆಳ್ದದ್ದು ಆ  ಪರಿಸರ ಆದ ಕಾರಣ, ನನಿಗೆ ಚಿಕ್ಕದಿರುವಾಗಲೇ  ಈ ವಿಶಿಷ್ಟ ಕಂನಡ ಕೇಳಿ, ಮಾತಾಡಿ  ಗೊತ್ತುಂಟು. ಈಗ ಕೆಲಸಕ್ಕೇಂತ  ಬೆಂಗ್ಳೂರಿಗೆ  ಬಂದ ಕಾರಣ ನನ್ನ  ಊರಿನ ಕನ್ನಡ  ಕೇಳ್ಳಿಕ್ಕೆ  ಸ ಸಿಕ್ಕುದಿಲ್ಲ. ವೆಬ್ ಸೈಟುಗಳಲ್ಲಿ  ಎಲ್ಲ ಇರೂದು ಬೆಂಗ್ಳೂರ್ ಕನ್ನಡ, ಅತವಾ ಗ್ರಂಥ  ಕನ್ನಡ ಮಾತ್ರ, ನಮ್ಮ ಕನ್ನಡ ಎಲ್ಲಿ ಸ ಇಲ್ಲ. ಅದಿಕ್ಕೆ ಈ ಪುಟದಲ್ಲಿ  ಬ್ಲಾಗಿಸುವಾ  ಅಂತ ಗ್ರೇಶಿದ್ದು.
ಆದೀತೋ? ಹೇಗೆ?
ನಾನು ಬರಿಯೂದು  ಎಂತ ಅಂತ ಹೇಳಿದ್ರೆ,  ಮನಸ್ಸಿಗೆ ತೋಚಿದ್ದು,  ಮನುಷ್ಯನಿಗೆ  ಸಂಬಂಧಿಸಿದ್ದು.
ಗೊತ್ತಾಯ್ತಾ..?
ಓದುಗರ Comfort Zone ಅನ್ನು  ಸರಿಯಾಗಿ ಅರ್ಥ ಮಾಡಿಕೊಳ್ತೇನೆ  ಅಂತ ನಾನು ತಿಳ್ಕೊಳ್ತೇನೆ..
ನಿಮ್ಮ ಪ್ರತಿಕ್ರಿಯೆಯನ್ನು ಆದಷ್ಟು ಮಂಗ್ಳೂರು ಕನ್ನಡದಲ್ಲೇ  ಬರೀರಿ, ಆಯ್ತಾ.  . . ?
ಒಂದುಸಮಯ ಸರಿಯಾಗಿ ಗೊತ್ತಿಲ್ಲದಿದ್ರೆ, ನಾಲ್ಕು ಸರ್ತಿ ಈ ಬ್ಲೋಗನ್ನು  ಓದಿ, ಆಗ ನಿಮಿಗೇ ಆ ರೀತಿ ಮಾತಾಡ್ಳಿಕ್ಕೆ ಬರ್ತದೆ. ಮತ್ತೆ  ಪೋಷ್ಟು ಮಾಡಿ.
ಬಂದುಕೋಂಡು ಇರಿ  ಮಾರಾಯ್ರೆ.. .
ನಮಸ್ಕಾರ. .

ನಿಮ್ಮ ಮಾಣಿ,
ಮಹೇಶ ಎಳ್ಯಡ್ಕ

2 comments:

Raveesh Kumar said...

ತು೦ಬಾ ಚ೦ದ ಉ೦ಟು ಮಾರಾಯ್ರೆ ನಿಮ್ಮ ಬ್ಲಾಗ್. ನಾನು ಕೂಡ ಮ೦ಗ್ಳೂರಿನವನೇ. ಆದರೆ ಒ೦ದು ವಿಷಯ ಘಟ್ಟದವರು ಯೂಸ್ ಮಾಡುವಷ್ಟು 'ಮಾರಾಯ್ರೆ' ಮ೦ಗ್ಳೂರಿನವರು ಯೂಸ್ ಮಾಡುವುದಿಲ್ಲ. ಯಾಕ೦ದ್ರೆ ನಾವು ಯೂಸ್ ಮಾಡುವುದು 'ಮಾರ್ರೇ' ಅಲ್ಲವೋ! ಎ೦ಥ ಹೇಳ್ತೀರ?

Prakash Shetty said...

ಮತ್ತೊಂದು ಇಸಯ ಗೊತ್ತುಂಟಾ...
ಮಂಗ್ಳೂರು ಕನ್ನಡ ಒಂದು ತರಾ ಆಗ್ಲಿಕ್ಕೆ ಕಾರಣ ನಮ್ಮಲ್ಲಿ ಇರುವ ಬೇರೆ ಬೇರೆ ಬಾಸೆ...
ಮತ್ತೆ ನಾವು ಮಾತಾಡುವಾಗ ನಮ್ಮ ಬಾಸೆಯಿಂದ ಎಣಿಸಿ ಕನ್ನಡದಲ್ಲಿ ಅದನ್ನು ಅರ್ಥ ಮಾಡಿ ಆಮೇಲೆ ಮಾತಾಡುವಾಗ ತುಂಬಾ ಹೊತ್ತಾಗುತ್ತದೆ.. ಮತ್ತೆ ನಮ್ಮ ತುಳು ಬಾಸೆಯ ಕೆಲವು ಶಬುದ ಬರ್ತದೆ..
ಮತ್ತೆ ನಮ್ಮ ತುಳು ಬಾಸೆ ಸೊಲ್ಪ ಸ್ಲೋ ಅಲ್ಲವ... ಅದಕ್ಕೆ ಕೂಡ ಇರ್ಬವುದು

ನಾನು ಹೇಳಿದ್ದು ಸರಿ ಅಲ್ಲವಾ