Friday, December 14

ಅಂತೂ ಬಂತು ಕುಡ್ಲಕ್ಕೆ ರೈಲು . . .

ಸುಮಾರು ವರ್ಷದ ಮೊದಲು ನಮ್ಮ ಊರಿನಲ್ಲಿ ಸ ರೈಲು ಹೋಗ್ತಾ ಇತ್ತು. ಬೆಳಿಗ್ಗೆ ಬೇಗ ಎದ್ದ ದಿನ ಅದ್ರ ಚುಕುಬುಕು ಕೇಳ್ತಾ ಇತ್ತು. ಆಗ ಅದೆಂತದೋ ' ಮೀಟರ್ ಗೇಜು ' ಅಂತ ನಮ್ಮ ಪಗೆಲನ ಹಾಗೆ ಸಪೂರದ್ದು ಇದ್ದದ್ದಂತೆ. ಅದನ್ನು ತೆಗ್ದು ಪೆರ್ಮರಿಯ ಹಾಗೆ ತೋರದ್ದು 'ಬ್ರೋಡು ಗೇಜು ' ಹಾಕ್ತೇವೆ ಅಂತ ಹೇಳಿಕೊಂಡು ಇದ್ದದ್ದನು ತೆಗ್ದ್ರಂತೆ . ನನಿಗೆ ಎಲ್ಲ ಸ ಸರಿಯಾಗಿ ನೆನ್ಪಿಲ್ಲ, ಅಷ್ಟು ಸಾ ಮೊದ್ಲು ಆದ ಕತೆ ಅಲ್ವಾ. ನಮ್ಮ ಆಚೆಮನೆ ಮಾಷ್ಟ್ರ ಮಗ ಪೀಯೂಸಿ ಕೊಲೇಜಿಗೆ ಪುತ್ತೂರಿಗೆ ಹೋಗ್ಲಿಕ್ಕೆ ಸುರು ಮಾಡಿದ್ದ ಟೈಮಿನಲ್ಲಿ ರೈಲು ಹೋಗ್ತಾ ಇತ್ತಂತೆ. ಸ್ಪೆಶಲು ಕ್ಲಾಸು ಅಂತ ಬೇಗ ಹೋದ ದಿವ್ಸ ಎಲ್ಲ , ರೈಲು ಮಾರ್ಗದ ಸಂಕ ದಾಟಿ ಹೋಗುವಾಗ ರೈಲು ಕಂಡುಕೊಂಡು ಇತ್ತಂತೆ, ಕೆಲವು ಸರ್ತಿ. ಈಗ ಆ ಹುಡುಗನಿಗೆ ಮದಿಮ್ಮೆ ಪ್ರಾಯ ಬಂದಿದೆ, ಎಷ್ಟು ಬೇಗ ಈ ಜವ್ವನರು ದೊಡ್ಡ ಆಗ್ತಾರೇಂತ ಅನಿಸ್ತದೆ ಮಾತ್ರ, ನೋಡಿದ್ರೆ ಬೇಗ ಅಲ್ಲ, ಅಷ್ಟು ಸಮಯ ಸ ಆಯ್ತು. :) ಮೊನ್ನೆ ೮ಕ್ಕೆ ಲಾಲು ಬಂದು ಪಚ್ಚೆ ಬಾವುಟ ತೋರಿಸಿ ರೈಲು ಬಿಟ್ಟದ್ದಲ್ವ ಆಗ್ಲೇ ಮತ್ತೆ ರೈಲಿನ ಶಬ್ದ ಕೇಳಿದ್ದು. ಎಂತ ಮಾಡಿದ್ದು ಇಷ್ಟು ಸಮಯ ಅಂತ, ಆಶರ್ಯ ಆಗ್ತದೆ ಮಾರೆ. ಅವತ್ತು ಆ ರೈಲು ಮಾರ್ಗ ಪಷ್ಟಿಗೆ ಮಾಡುವಾಗ ಸ ಇಷ್ಟು ಸಮಯ ತೆಕ್ಕೊಂದಿದ್ದಾರ ಇಲ್ವ ಅಂತ ಡೌಟು ಬರ್ತದೆ . ನಿಜವಾಗಿ ನೋಡಿದ್ರೆ ಬೆಂಗ್ಲೂರಿನಿಂದ ಹಾಸನದ ವರೆಗೆ ಎಲ್ಲ ಸ ಸರಿ ಆಗಿ ಇತ್ತು, ಇವ್ರಿಗೆ ಕೆಲಸ ಮಾಡ್ಲಿಕ್ಕೆ ಇದ್ದದ್ದು ಹಾಸನದಿಂದ ಮಂಗ್ಲೂರಿನ ವರೆಗೆ ಮಾತ್ರ, ಅದು ಸಾ ಬೇಗ ಆಗ್ಲಿಲ್ಲ ಅಂತ ಹೇಳಿದ್ರೆ . ಎಂತ ಅವಸ್ತೆ . ಹೆಕ್ಕ್ . ಎಂತ ಗೊತ್ತುಂಟ: ಗಂಡ ಹೊಸ ಸೀರೆ ತರ್ತಾನೆ ಅಂತ ಇದ್ದ ಸೀರೆ ಎಲ್ಲ ದಿಕ್ಕೆಲಿಗೆ ಹಾಕಿ ಬಾಗಿಲು ಹಾಕಿ ಕೂತ ಹೆಂಡತ್ತಿಯ ಕತೆಯ ಹಾಗೆ ಮಾಡಿದ್ರು ಇವ್ರು, ಹೊಸ ರೈಲು ಮಾರ್ಗಕ್ಕೆ ಅಗಲದ ಪಟ್ಟಿ ಆಗ್ಬೇಕು ಅಂತ ಮೊದಲಿನದ್ದು ಎಲ್ಲ ತೆಗದು ಸೈಡಿನಲ್ಲಿ ಇಟ್ರು. ಗೇಜು ಪರಿವರ್ತನೆ ಅಂತ, ಮತ್ತೆ ವರ್ಷಗಟ್ಲೆ ಅದರ ಸುದ್ದಿಗೆ ಬರಲಿಲ್ಲ, ಆ ಮೊದ್ಲಿನ ರೈಲು ಪಟ್ಟಿಯ ಜಲ್ಲಿ ಕಲ್ಲು ಉಳೀತದ ? ಅದು ಈಗ ಎಷ್ಟೋ ಜೆನರ ಟೆರೀಸು ಮನೆಯ ಕೋಂಗ್ರೇಟು ಪೌನ್ಡೆಶನ್ ನ ಅಡಿಯಲ್ಲಿ ಉಂಟು, ಪಾಪ. ಎಲ್ಲೋರು ಸುಬಗರೇ . ಈಗ ಯಾರತ್ರೆ ಅಂತ ಕೆಳುದು. ಮತ್ತೆ ಪುನಾ ಹಾಕಿ ಆಗ್ಬೇಕಷ್ಟೇ. ಹೊಸ ಪಟ್ಟಿ ಹಾಕ್ಲಿಕ್ಕೆ ಆಗುವಾಗ ಹಳತ್ತು ತೆಗೀಬೇಕಿತ್ತು, ಇದು ಮೊದಲೇ ತೆಗ್ದು ಎಲ್ಲ ಕಾಲಿ.! ಅಂತೂ ಇಂತೂ ಎಲ್ಲೋರೂ ಬೈದು ಅಕೇರಿಗೆ ಸುಬ್ರಮ್ಮಣ್ಯ ದ ವರೆಗೆ ಹಾಕಿದ್ರು, ಪೆಸೆನ್ಜರ್ ರೈಲು. ಕುಡ್ಲದಿಂದ ಸುಬ್ರಮ್ಮಣ್ಯ ಕ್ಕೆ ಹೋಗುವವರಿಗೆ ಅತವ ಸುಬ್ರಮ್ಮಣ್ಯ ಕ್ಕೆ ಬಂದ ಗಟ್ಟದವರಿಗೆ ಮಂಗಳೂರಿಗೆ ಹೋಗಲಿಕ್ಕೆ ಎಲ್ಲ ಅನುಕೂಲ ಆಗ್ತ ಇತ್ತೋ ಏನೋ. ಆದ್ರೆ ಸ ಗಟ್ಟಕ್ಕೆ ರೈಲು ಹತ್ತುವ ಹಾಗೆ ಆಗ್ಲಿಲ್ಲ.ಅದ್ರ ಹಿಂದೆ ನಮ್ಮ ಊರಿನ ಕೆಲವು ಪ್ರೈವೇತು ಬಸ್ಸುಗಳ ದನಿಗಳ ಕೈವಾಡ ಉಂಟು ಮಾರ್ರೆ ಅಂತ ನಮ್ಮ ಊರಿನಲ್ಲಿ ಮಾತಾಡ್ತಾ ಇದ್ರು, ಅವ್ರು ಪೈಸೆ ಕೊಟ್ಟು ಆ ರೈಲನ್ನು ತಡವು ಮಾಡಿಸೂದು , ಬಸ್ಸಿನವ್ರಿಗೆ ಜೆನ ಬರ್ತಾ ಇರ್ತದೆ ಅಲ್ವ, ಅದಿಕ್ಕೆ. ಅಕೇರಿಗೆ ಇವತ್ತು ನಾಳೆ ಇವತ್ತು ನಾಳೆ ಅಂತ ಮೊನ್ನೆ ನಮ್ಮ ಲಾಲು ಬಂದು ರೈಲು ಸುರು ಮಾಡಿದ. ಈಗ ಸರಾಗ ಹೋಗ್ತಾ ಉಂಟು, ೧ ವಾರ ಆಯ್ತು, ಒಳ್ಳೆ ಜನ ಬರ್ತದಂತೆ, ಬಸ್ಸುಗಳಿಗೆ ಒಳ್ಳೆತ ಪೆಟ್ಟು ಉಂಟು ಅಂತ ಮಾತಾಡಿಕೊಳ್ತಾರೆ. ಯಾಕೆಳಿದ್ರೆ ಇದ್ರಲ್ಲಿ ಹೋಗೂದು ಬಾರಿ ಆರಾಮ ಅಲ್ವ, ಮಂಚದಲ್ಲಿ ಮಲಗಿದ ಹಾಗೆ ಮಲಗಲಿಕ್ಕೆ ಆಗ್ತದೆ. ಹೋಗುವಾಗ ಪಜೆಮಂದ್ರಿ ತೆಕ್ಕೊಂದ್ರೆ ಮನೆಯಲ್ಲಿ ಇದ್ದ ಹಾಗೆ ಆಗ್ತದೆ. ಸುಬ್ರಮ್ಮಣ್ಯ ಕ್ಕೆ ಬಂದ ಗಟ್ಟದವ್ರು ಕಂಡಾಬಟ್ಟೆ ಜೆನ ರೈಲಿನ ಪ್ರಯೋಜನ ಪಡೀತಾರಂತೆ. ಬರುವಾಗ ಗಟ್ಟದ ಗೌಡುಗಳಿಗೆ ನಮ್ಮ ಊರಿನ ಸಂತೆಗಳಿಗೆ ತರ್ಕಾರಿ ಎಲ್ಲ ತರ್ಲಿಕ್ಕೆ ಸ ಬಾರಿ ಸುಲಬ ಆಯ್ತು. ಅಲ್ವ ? ಅವತ್ತೇ ಆಗಬೇಕಾದ ಸೌಕರ್ಯ ಈಗ ಸಿಕ್ಕಿತು ನಮಿಗೆ. ಅಂತೂ ನಮ್ಮ ಕುಡ್ಲಕ್ಕೆ ಸ ರೈಲು ಬಂತು .

No comments: