Saturday, December 20

ಬರಹಗಾರರ ಬದುಕು 'ಚೈತ್ರರಶ್ಮಿ'

ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಕಾಲಿನುದ್ದದ ಹಾಸಿಗೆಯಲ್ಲಿ ಕಾಲುಚಾಚಿಕೊಂಡು ಮಲಗ್ಲಿಕ್ಕೆ ಸಾಕಾಗುವ ನೆಮ್ಮದಿಯ ಕೆಲಸ . ಎಲ್ಲರ ಹಾಗೆ ಕ್ಲಬ್ , ಔಟಿಂಗ್ ಅಂತ ತಿರುಗಬಹುದಾದ ಎಳೆ ಪ್ರಾಯ. ಚಿಗುರು ಮೀಸೆ ಬಂದಿರುವ ಸ್ಮಾರ್ಟ್ ವ್ಯಕ್ತಿತ್ವ. ಎಲ್ಲ ಉಂಟು, ಆದ್ರೆ ಬರೀಬೇಕು ಅಂತ ಒಂದು ಛಲ ಸ ಉಂಟು!!

ನಾನು ಹೇಳಿಕೊಂಡು ಇರೂದು ನನ್ನ ಬಗ್ಗೆ ಅಲ್ಲ ಆಯ್ತ ಮಾರ್ರೆ. ನಮ್ಮ ರಾಚಂ ನ ಬಗ್ಗೆ. ರಾಚಂ ನನ್ನದೇ ಪ್ರಾಯ. ನನಿಗಿಂತ ಮೊದಲೇ ಬೆಂಗಳೂರಿಗೆ ಬಂದಿದ್ದಾರೆ. ದೂರದ ಹಳ್ಳಿ ಊರಿನಲ್ಲಿ ಇರುವಾಗಲೇ ಬರೀತಾ ಇದ್ರಂತೆ, ನಾವೆಲ್ಲ ಮೂಗಿನಲ್ಲಿ ಸಿಂಬಳ ಬಿಟ್ಟುಕೊಂಡು ಆಚೆ ಮನೆ ಹುಡುಗನತ್ರೆ ಜಗಳ ಮಾಡುವ ಪ್ರಾಯದಲ್ಲಿ.. :-)
ಮೈಸೂರಿನಲ್ಲಿ ಇಂಜಿನಿಯರಿಂಗು ಮಾಡಿದ್ದು, ಇಂಜಿನಿಯರಿಂಗು ಮಾಡುವಾಗ ಅಂತೂ, ಈ ಬರ್ದದ್ದಕ್ಕೆ ಒಂದು ವೇದಿಕೆ ಕೊಡ್ಬೇಕು ಅಂತ ಅನಿಸಿಕೆ ಜಾಸ್ತಿ ಆದದ್ದಂತೆ. ಹೆಚ್ಚು ಭಾವುಕರಾಗಿ ವ್ಯವಹರಿಸುವ ಕಾರಣವೋ ಎಂತದ್ದೋ, ಭಾವನೆಗೆ ಸಂಬಂಧ ಪಟ್ಟ ಲೇಖನಗಳ ಒಂದು ಗೊಂಚಲೇ ತಯಾರಾದ ಕೂಡ್ಲೇ ಕೈ ಬರಹದ ಒಂದು ಪತ್ರಿಕೆಗೆ ಜನ್ಮ ಕೊಟ್ಟ್ರು. ಅದ್ರ ಹೆಸರೇ 'ಚೈತ್ರರಶ್ಮಿ' . ಹೀಗೆ ಬೆಳ್ದು ಬೆಳ್ದು ಮುಂದೆ ಕಂಪ್ಯೂಟರಿನಲ್ಲಿ ಟೈಪ್ ಮಾಡಿ ಚೆಂದ ಲೇಔಟ್ ಮಾಡಿ ಪೀಡೀಯಫ್ (PDF) ಪೇಪರು ಮಾಡಿ ಓದುಗ ವೃಂದಕ್ಕೆ ಕಳಿಸ್ತಿದ್ದ್ರಂತೆ.

ಹೀಗೆ ಸುಮಾರು ದಿನ ನಡೀತಾ ಇತ್ತು, ಒಂದು ದಿನ ಅವ್ರನ್ನು 'ಮನು ಅಕ್ಕ ' ನ ನೂಪುರ ವಾರ್ಷಿಕೋತ್ಸವದಲ್ಲಿ ಭೇಟಿ ಮಾಡಿದೆ, ಸ್ವಲ್ಪ ಹೊತ್ತು ಮಾತಾಡುವಾಗ್ಲೇ ಗೊತ್ತಾಯ್ತ, ಜನ ಸ್ವಲ್ಪ ಉಶಾರುಂಟು ಅಂತ. ಅವ್ರ ಮನಸ್ಸಿನ ಆಲೋಚನೆಗಳ ಬಗ್ಗೆ ಎಲ್ಲ ಸ್ವಲ್ಪ ವಿಚಾರ ವಿನಿಮಯ ಆಯ್ತು. ಚೈತ್ರರಶ್ಮಿಯ ಹುಟ್ಟು ಬೆಳವಣಿಗೆ ಯ ವಿವರಣೆ ಸಿಕ್ಕಿದ್ದು ಅಲ್ಲಿಯೇ ನನಿಗೆ. 'ಗ್ರಾಮೀಣ ಯುವ ಬರಹಗಾರರಿಗೆ ಒಂದು ವೇದಿಕೆ' ಅಂತ ತನ್ನ ವಿವರವನ್ನು ತಿಳಿಸಿದರು. ಅದೂ ಅಲ್ಲದೆ, ೩ನೆ ಕೆಲವು ಸಂಚಿಕೆಗಳನ್ನು ಕೊಟ್ಟ್ರು. ಕುಶಿ ಆಯಿತು ಮಾರ್ರೆ ನನಿಗೆ. ಬರೀವವ್ರೆ ಇಲ್ಲ ಈಗ, ಅಂತದ್ರಲ್ಲಿ ಬರೀರಿ ಬರೀರಿ ಅಂತ ಪ್ರೋತ್ಸಾಹ ಕೊಟ್ಟು , ತನ್ನ ಆ ಪತ್ರಿಕೆಯಲ್ಲಿ ಪ್ರಕಟ ಮಾಡಿ, ತಾನೆ ವಿತರಣೆ ಸ ಮಾಡಿ ಆ ಮೂಲಕ ಸರಸ್ವತಿ ಸೇವೆ ಮಾಡಿಕೊಂಡು ಇರುವ ನಮ್ಮ ರಾಚಂ ಗೆ ಒಂದು ನಮಸ್ಕಾರ ನನ್ನದು. ಇಷ್ಟು ಹೇಳಿ ಒಂದು ವಿಷಯ ಹೇಳ್ಬೇಕು ನಾನು, ಈ ಚೈತ್ರ ರಶ್ಮಿ ಅಂತ ಹೇಳುದು ಎಲ್ಲಿ ಸಾ ಮಾರ್ಲಿಕ್ಕೆ ಸಿಗೋದಿಲ್ಲ , ಫ್ರೀ ಆಗಿ ಮಾತ್ರ ಇರೂದು.

ಈಗ ಅವ್ರ ಪೇಪರು ವೆಬ್ಸೈಟ್ ನಲ್ಲಿ ಸ ಸಿಗ್ತದೆ, http://chaitrarashmi.com ಅಂತ ಕೊಟ್ರೆ ಎಲ್ಲ ಓದ್ಲಿಕ್ಕೆ ಸಿಗ್ತದೆ. ಹೇಳಿದ ಹಾಗೆ, ರಾಚಂ ಹೇಳಿದ್ರೆ 'ರಾಮ ಚಂದ್ರ ಹೆಗಡೆ' ಅಂತ. 9986372503 ಅವ್ರ ಫೋನು ನಂಬರು. ಖಂಡಿತ ಫೋನ್ ಮಾಡಿ, ಚೆಂದಕೆ ಮಾತಾಡ್ತಾರೆ. ಲೇಖನ ಬರೀಲಿಕೆ ಸ್ಫೂರ್ತಿ ಸಾ ಅವ್ರೆ ಕೊಡ್ತಾರೆ. ನೀವು ಸದ್ಯ ಬರ್ದ ಲೇಖನ ಕಳಿಸಿ, ಹೇಗೆ ಉತ್ತರ ಬರ್ತದೆ ನೋಡಿ. (ನನ್ನತ್ರ ಸ ಒಂದು ಬರೀಲಿಕ್ಕೆ ಹೇಳಿ ಹೇಳಿ, ನಾನು ಕೂಡಾ ಕಳಿಸ್ತೇನೆ ಅಂತ ಹೇಳಿ ಹೇಳಿ, ಈಗ ಹೇಳೂದನ್ನೇ ಬಿಟ್ಟಿದ್ದಾರೆ... :-D )

ರಾಚಂನಂತಹ ಕನ್ನಡ ಮಕ್ಕಳು ಇರುವಾಗ ಬರಹಗಾರರ ಬದುಕೇ ಚೈತ್ರ-ರಶ್ಮಿ. ಇದ್ರಲ್ಲಿ ಸಂಶಯ ಇಲ್ಲ.

No comments: