Friday, January 18

ಉಡುಪಿಯ ಪರ್ಯಾಯದ ಬಗ್ಗೆ :

ಉಡುಪಿ ಶ್ರೀಕೃಷ್ಣಾ. . . ನೋಡಿಕೋಂಡು ಇದ್ದ ಹಾಗೇ ಎಂತ ಆಗಿ ಹೋಯ್ತು ಉಡುಪಿಯಲ್ಲಿ.., ಛೇ. . . ಕಳೆದ ಒಂದು ತಿಂಗಳಿಂದ ಆಲೋಚನೆ ಬರ್ತಿತ್ತು, ಈ ವಿಷಯ ಬರೀಬೇಕು ಅಂತ. ಯಾವ ಟೀವಿ ಹಾಕಿದ್ರೂ ಹೆಡ್ ಲೈನ್ಸ್ ಒಂದೇ - ಪರ್ಯಾಯ ಬಿಕ್ಕಟ್ಟು. ಯಾವಗ್ಲೂ ಹಾಗೇ, ಅರ್ಧ ಬಿಕ್ಕಟ್ಟು ಮಾಧ್ಯಮದವರದ್ದು, ಅರ್ಧ ನಿಜವಾದ್ದು. ಮಾಧ್ಯಮದವರು ವಾಣಿಜ್ಯಿಕವಾಗಿ ತಮ್ಮ ಖಿime Sಟoಣ ಗಳನ್ನು ಮಾರಿಕೊಂಡು ಇರ್ತಾರೆ. ಆ ಹೊತು ತುಂಬಿಸ್ಬೇಕಲ್ಲ, ಅದ್ಕೆ ಹೀಗೇ ಎನಾದ್ರು ಸುದ್ದಿಗಳನ್ನು ಹುಡುಕ್ತಾರೆ. ಅಷ್ಟೆ. ಎ ಅನಾದಿ ಕಾಲದಲ್ಲಿ ಮಧ್ವಾಚಾರ್ಯರು ಮಧ್ವತತ್ವ ಪ್ರಚಾರಕ್ಕೇಂತ, ಮುಖ್ಯವಾಗಿ ಧರ್ಮದ ಉಳಿವಿಗಾಗಿ ಅನೇಕ ಕೈಂಕರ್ಯ ಮಾಡಿದ್ರು. ಅದ್ರಲ್ಲಿ ಬಹುಮುಖ್ಯವಾದ ಕೆಲಸ ಎಂತಹೇಳಿದ್ರೆ, ತಮ್ಮ ಕರ್ಮಭೂಮಿ ಆದ ಉಡುಪಿಯ ಸುತ್ತುಮುತ್ತಲಿನ ೮ ಊರುಗಳಲ್ಲಿ ಮಠಗಳನ್ನು ಸ್ಥಾಪಿಸಿ, ತಮ್ಮ ಶಿಷ್ಯರನ್ನು ಅಲ್ಲಿ ನೆಲೆಗೊಳಿಸಿ ಶ್ರೀಹರಿಯ ಸರ್ವೋತ್ತಮತ್ವವನ್ನು ಸಾರಲು ಮೊದಲು ಮಾಡಿದ್ದು. ಉಡುಪಿಯ ಶ್ರೀಕೃಷ್ಣನ ದೇವಾಲಯದ ಆವರಣದಲ್ಲಿ ಅದೇ ೮ ಮಠಗಳ ಶಾಖೆಗಳನ್ನು ಆರಂಭಿಸಿ ಸಮುಷ್ಟಿಗೊಳಿಸಿದ್ರು. ಶತಮಾನಗಳ ಕಾಲದಿಂದ ಅದು ಸರಿಯಾಗಿ ನಡೀತಾ ಉಂಟು.. ೮ ಮಠಗಳು, ಮತ್ತು ಒಂದು ಮುಖ್ಯ ಶ್ರೀಕೃಷ್ಣ ಸಾನ್ನಿಧ್ಯ. ಎಲ್ಲ ಯತಿಗಳೂ ಸಮಾನ. ಅದಕ್ಕೇ ರೂಪುಗೊಂಡದ್ದು ಈಗ ಅಸ್ತಿತ್ವದಲ್ಲಿರುವಂತ, ಪ್ರಸ್ತುತ ಸುದ್ದಿಯಲ್ಲಿರುವ ಪರ್ಯಾಯ . ಆವರ್ತನಾ ವಿಧಾನದಲ್ಲಿ ಎಲ್ಲ ೮ ಮಠಗಳೂ ಎರಡೆರಡು ವರ್ಷ ಉಡುಪಿ ಶ್ರೀಕೃಷ್ಣನ ಪೂಜಾಧಿಕಾರ. ಪ್ರತಿ ೧೬ ವರ್ಷಕ್ಕೊಮ್ಮೆ ಅಧಿಕಾರ ಪುನರಾವರ್ತನೆ. ಜನೆವರಿ ೧೭ ರ ಸಮಯಕ್ಕೆ ಆ ಸುಸಮಯ ಬರ್ತದೆ- ಸಾಮಾನ್ಯವಾಗಿ. ಆದ್ರೆ ಈ ಸಲ ಸ್ವಲ್ಪ ಗಂಭೀರ ವಿಷಯವೇ ಮಾರಾಯ್ರೇ. . . ಪುತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರರು ಕ್ರೃಷ್ಣಾಪುರ ಯತಿಗಳಿಂದ ಶ್ರೀಕೃಷ್ಣ ಪೂಜಾ ಅಧಿಕಾರ ಪಡೆಯುವ ಸಂಕ್ರಮಣ ಆಗ್ಬೇಕಾದದ್ದು. ಪರ್ಯಾಯ ಅಂದ್ರೆ ಶುಭ-ಸಂಭ್ರಮ ಸಡಗರದ ಹಬ್ಬದ ವಾತಾವರಣ ಉಡುಪಿಯ ಆದ್ಯಂತ. ವಿಷಯ ಇರೂದು ಅಲ್ಲೇ ನೋಡಿ, ಪುತ್ತಿಗೆ ಶ್ರೀಗಳು ಮೊನ್ನೆ ಮೊನ್ನೆ ತಮ್ಮ ವಿದೇಶ ಪ್ರಯಾಣ ಮುಗಿಸಿ ಅದರ ಎeಣ ಐಚಿg ಕಳಿಯುವ ಮೊದ್ಲೇ ಪರ್ಯಾಯದ ಬಗ್ಗೆ ಹೇಳಿಕೆ ಸುರು ಮಾಡಿದ್ರು ನೋಡಿ. ಎಲ್ಲ ಪತ್ರಿಕೆಗಳಲ್ಲೂ ಹಿರಿಯ ಪೇಜಾವರರ ಸಹಿತ ಉಳಿದ ಮಠಗಳ ಬಗ್ಗೆ ಮಡಿವಾದಿಗಳು ಎನ್ನಿಸುವ ಪ್ರಯತ್ನ. ಪೀತಪತ್ರಿಕೆಗಳಂತೂ - ಹೇಳಿ ಸುಖ ಇಲ್ಲ -ಅಷ್ಟೂ ಬಾಲಿಷ ವಾಕ್ಯರಚನೆಗಳು. ಐ ವಿವೇಕಾನಂದರಿಗೆ ಸಮೀಕರಿಸಿದ ಪುತ್ತಿಗೆಯವರ ಬಗೆಗಿನ ಮಾತುಗಳು, ಭಾರತದ ಧಾರ್ಮಿಕ ರಾಯಭಾರಿ , ಹಿಂದೂ ಧರ್ಮದ ಕಾಂತಿಯನ್ನು ಲೋಕದಲ್ಲಿ ಬೆಳಗುವವರು, ಸಮುದ್ರೋಲ್ಲಂಘನ ನಿಶಿದ್ಧ ಎಂಬುದು ಮಡಿವಂತಿಕೆ, ಇತ್ಯಾದಿ ಎಂತೆಂತದ್ದೋ . . ಇಲ್ಲಿ ಆಲೋಚಿಸಬೇಕಾದ ವಿಚಾರಗಳು ಸುಮಾರು ಉಂಟು. ಹಿಂದಿನ ಕಾಲದಲ್ಲಿ ಸಮುದ್ರ ಪ್ರಯಾಣಕ್ಕೆ ಉಪಯೋಗಿಸುತ್ತಿದ್ದ ದೋಣಿಗಳಿಗೆ ಮರಗಳ ದೀರ್ಘ ಬಾಳಿಕೆಗಾಗಿ ಮೀನಿನಿಂದ ತೆಗೆದಂತಹ ಪ್ರಾಣಿಜನ್ಯ ಕೊಬ್ಬುಗಳ ಉಪಯೋಗವಾಗ್ತಿತ್ತು. ಇದು ಶುದ್ಧ ಕ್ಕೆ ಸಾಲದು ಎಂಬ ಕಾರಣದಿಂದ ದೋಣಿ ಪ್ರ ಯಾಣ ನಿಷೇಧವಾಯಿತು. ಬೇರೆ ಹಲವು ಕಾರಣಗಳಿರ್‌ಬಹುದು, ಒಟ್ಟಿನಲ್ಲಿ ನಿಶೇಧವೆಂದರೆ ನಿಶೇಧ. ಉಳ್ಳಾಲದ ರಾಣಿ ಅಬ್ಬಕ್ಕನ ಸೈನ್ಯಕ್ಕೆ ಇದೇ ಸಮುದ್ರೋಲ್ಲಂಘನದ ತೊಂದರೆಯಿಂದ ಹಿಂದುಗಳು ಬರದೆ ಇದ್ದಾಗ ಮತಾಂತರಕ್ಕೆ ಪ್ರೋತ್ಸಾಹಿಸಿ ಆ ಮೂಲಕ ಸೈನ್ಯ ತುಂಬಿಸಬೇಕಾದ ಅನಿವಾರ್ಯತೆ ಸ್ರೃಸ್ಠಿಯಾಗಿತ್ತು. ಎಂಥ ನಾಚಿಕೆ. . .! ಈ ೨೦೦೮ ಎಂಬ ಆಧುನಿಕ ಜಗತ್ತಿನಲ್ಲಿ ದೂರವು ಬಹಳ ಹತ್ತಿರವಾಗಿದೆ. ಮಠದ ಶಿಷ್ಯರು ಲೋಕೋತ್ತರ ವಾಗಿ ಹರಡಿರುತ್ತಾರೆ. ಹಾಗಿರುವಾಗ ಮೊದಲಿನ ಕಲ್ಪನೆಗಳಿಂದ ಹೊರಬರುವ ಕ್ರಾಂತಿ ಆಗ್ಬೇಕಲ್ವಾ? ಆಗ್ಬೇಕು ಹೌದು, ಆದ್ರೆ ಅದು ಒಂದು ಅಳತೆಯಲ್ಲಿರ್ಬೇಕು. ಮಠಾಧಿಪತಿಗಳಾದಮೇಲೆ, ನಮ್ಮ ಧರ್ಮ ದ ಬಗ್ಗೆ ಒಲವಿದ್ದುಕೊಂಡು, ನಮ್ಮನ್ನು ಮೊದಲು ಉದ್ಧರಿಸಿಕೊಳ್ಳಬೇಕು. ಮೊದಲು ಭಾರತದ ಉದ್ಧಾರ, ಆಮೇಲೆ ಪ್ರಪಂಚ. ವಿವೇಕಾನಂದರು ಹೋದದ್ದು ವಿಶ್ವ ಕ್ಕೆ ಹಿಂದೂ ಧರ್ಮದ ಆಳ-ವಿಸ್ತಾರ ಪರಿಚಯ ಮಾಡ್ಳಿಕ್ಕೆ, ಭಾರತದ ಸನಾತನ ಧರ್ಮದ ಪರಿಚಯ ಮಾಡ್ಳಿಕ್ಕೆ. ಮಾಧ್ವ ತತ್ವ ಪ್ರಚಾರಕ್ಕೂ ಅಲ್ಲ, ತಮ್ಮ ಮಠದ ಏಳಿಗೆಗಾಗಿಯೂ ಅಲ್ಲ. ಅಷ್ಟಕ್ಕೂ ತಮಗಾಗಿ ಸ್ವಂತದ್ದಾದ ಮಠವೂ ಇರ್ಲಿಲ್ಲ! ಅಲ್ಲದೆ ಅಮೇರಿಕದ ಅಧ್ಯಕ್ಶರ ಭೇಟಿಗಾಗಿ ಹಾತೊರೆಯಲಿಲ್ಲ. ಶೋಕಿಗಾಗಿ ವಿದೇಶ ಪ್ರಯಾಣ ನಮಗೆ ನಿಮಗೆ ಸರಿ, ಆದರೆ ಮಠಾಧಿಪತಿಗಳಿಗೆ ಸರಿ ಹೊಂದುತ್ತದೋ? ಇಡಿಯ ಜೀವಮಾನ ಭಾರತಕ್ಕೇಂತ ಮುಡಿಪಾಗಿಟ್ಟು ೮೦ ರ ಆಸುಪಾಸಿನಲ್ಲಿಯೂ ಹದಿ ಹರೆಯದ ಉತ್ಸಾಹ ತುಂಬಿಕೊಂಡ ಪೇಜಾವರರು ಅದೇ ಕಾರಣಕ್ಕೆ ನನಗೆ ಇಷ್ಟವಾಗುತ್ತಾರೆ. ನಿಮಗೆ ನೆನ್ಪುಂಟೋ ಏನೋ, ಮೊದಲೊಮ್ಮೆ ಅವರ ಶಿಷ್ಯ ಯತಿಗಳು ವಿದೇಶ ಪ್ರಯಾಣ ಮಾಡಿದ್ದಾಗಲೂ ಪೂಜೆಗೆ ಅನುಮತಿ ಕೊಡ್ಲಿಲ್ಲ, ಈಗಲೂ ಅಷ್ಟೆ, ಅದೇ ವಾದ. ಒಂದೊಂದು ಕಂಪ್ಯೂಟರಿಗೆ ಒಂದೊಂದು ಕೀಬೋರ್ಡು ಇದ್ದ ಹಾಗೆ ಒಂದೊಂದು ಕ್ಷೇತ್ರಕ್ಕೆ ಒಂದೋಂದು ಕ್ರಮ ಇರ್ತದೆ, ಅದನ್ನು ಪಾಲಿಸೂದು ಭಾರತೀಯರ ಕ್ರಮ ಅಲ್ವಾ? ಉಡುಪಿಯ ಹಿರಿಯ ಯತಿಗಳಾದ ಅವರು ಅದಕ್ಕಾಗಿ ಹೋರಾಡುವುದ ಸರಿಯಲ್ವಾ? ೧೬ ವರ್ಷದ ಪರ್ಯಾಯ ಅವಧಿಯ ೧೪ ವರ್ಶಗಳಲ್ಲಿ ದೇಶ ವಿದೇಶ ಸುತ್ತಿ, ತಮ್ಮ, ಹಾಗೂ ಮಠದ ಏಳಿಗೆ ಮಾಡಿ, ೨ ವರ್ಶ ಪೂಜೆ ಮಾಡ್ತೇನೆ ಅಂತ ಹಠ ಹಿದಿದ್ರೆ, ಅದು ಸರಿ ಕಾಣ್ಬಹುದಾ? ಒಂದು ಮಠದ ಯತಿಗಳು, ಆ ಮಠದ ಶಾಸನಕ್ಕೆ ಬದ್ಧರಾಗಿಯೇ ಪೀಠಾರೋಹಣ ಮಾಡಿದ್ದು, ಹಾಗಿರುವಾಗ ಈಗ ರಚ್ಚೆ ಹಿಡಿದರೆ ಆಗ್ತದಾ? ಏನೇ ಇದ್ದರೂ, ಒಂದು ಮಹಾಪ್ರವಾಹ ಊರಿನ ಕೊಚ್ಚೆ ಗುಂಡಿಯನ್ನು ಮಾರ್ಗಕ್ಕೆ ತಂದು ಹಾಕಿದ ಹಾಗೆ, ಈ ಪರ್ಯಾಯ ಉಡುಪಿಯ ಆಂತರಿಕ ಸಂಬಂಧದ ಹುಳುಕುಗಳನ್ನು ಹೊರಹಾಕಿ ಜಗಜ್ಜಾಹೀರು ಮಾದಿದ್ದು ಮಾತ್ರ ಖೇದಕರ... ಅಲ್ವಾ? ಹಿರಿಯರಾದ ಪೇಜಾವರರನ್ನು ಕೆಲವರು ಖಳನಾಯಕರಂತೆ ಚಿತ್ರಿಸುವುದು ಕಂಡಾಗ ನೋವಾಯಿತು ನನಿಗೆ, ಅದಕ್ಕೆ ಇಲ್ಲಿ ಬ್ಲಾಗಿಸಿದೆ. ಆಭಿಪ್ರಾಯ ತಿಳಿಸಿ. ~~

No comments: